CET Question and Answers click 👇👇👇
1. Biology click 👈👈👈
2. Physics click 👈👈👈
3. Chemestry click 👈👈👈
4 Mathematics click 👈👈👈
CET Question and Answers click 👇👇👇
1. Biology click 👈👈👈
2. Physics click 👈👈👈
3. Chemestry click 👈👈👈
4 Mathematics click 👈👈👈
1. Sehra film songs
2. ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
5. ರಾಯರು ಬಂದರು ಮಾವನ ಮನೆಗೆ (ಮೈಸೂರು ಮಲ್ಲಿಗೆ)
ದಿನಾಂಕ : 03-12-2022 ರಂದು ಅಕ್ಷಯಾಮೃತ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ website ಮತ್ತು 2023 ನೇ ಸಾಲಿನ ಸೊಸೈಟಿಯ ಕ್ಯಾಲೆಂಡರ್ ಕವಳೆ ಮಠದ ಮಠಾಧೀಶರಾದ ಶ್ರೀ ಶೀ ಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಅವರು ಕೈವಲ್ಯ ಮಠ ಆತ್ರಾಡಿ ಶಾಖೆಯಲ್ಲಿ ಅನಾವರಣ ಗೊಳಿಸಿದರು.
ಅಕ್ಷಯಾಮೃತ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮ
ದಿನಾಂಕ 14 10 2021 ರಂದು ಹಿರಿಯಡಕದಲ್ಲಿ ನೂತನವಾಗಿ ಅಕ್ಷಯಾಮೃತಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಶ್ರೀರಾಮಕೃಷ್ಣ ಮಠ ಬೈಲೂರು ಕಾರ್ಕಳ ಇಲ್ಲಿಯ ಅಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಶ್ರೀ ಪ್ರಭೋದಾನಂದ ಸ್ವಾಮಿ ಮಹಾರಾಜ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಆಶೀರ್ವಚನ ನೀಡಿದರು
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ನರಸಿಂಹ ನರಸಿಂಹ ದೇವಸ್ಥಾನದ ಮುಕ್ತೇಸರರಾದ ಶ್ರೀ ರಮೇಶ ಸಾಲ್ವಂಕರ್ ರವರು ಮಾತನಾಡಿ ದೇಸಿ ಗೋವುಗಳ ಬಗ್ಗೆ ಕಾಳಜಿ ಹೊಂದಿರುವ ಕೋ-ಆಪರೇಟಿವ್ ಸೊಸೈಟಿಯು ಪರಸ್ಪರ ಸಹಕಾರದಿಂದ ಮುಂದೆ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸಂಧ್ಯಾ ಕಾಮತ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ ನಾಯಕ್, ಶ್ರೀ ಸತ್ಯಾನಂದ , ಶ್ರೀ ಶ್ರೀಶ ನಾಯಕ್ ಪೆರ್ಣಂಕಿಲ ಉಪಸ್ಥಿತರಿದ್ದರು.
ಶ್ರೀಮತಿ ವಿಜಯಲಕ್ಷ್ಮಿ ಯವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ನೂಜಿ ಜನಾರ್ಧನ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರವೀಂದ್ರಕುಮಾರ್ ಪ್ರಭು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಸ್ಥೆಯ ಮುಖ್ಯ ಪ್ರವರ್ತಕರಾದ ಶ್ರೀ ಶ್ರೀಕಾಂತ್ ಕಾಮತ್ ವಂದನಾರ್ಪಣೆಗೈದರು.
ಸಮಾನಮನಸ್ಕ ಸಮಾಜದ ವ್ಯಕ್ತಿಗಳಿಂದ ಪ್ರಾರಂಭಿಸಲ್ಪಟ್ಟ ಅಕ್ಷಯಾಮೃತವು ಜನರಿಗೆ ತರಬೇತಿ ನೀಡುವ ಮತ್ತು ನಮ್ಮ ಸ್ಥಳೀಯ ತಳಿ ಮಳೆನಾಡು ಗಿಡ್ಡ ಹಸುಗಳ ಬಗ್ಗೆ ಜಾಗೃತಿ ಮೂಡಿಸುವ ಸಂಸ್ಥೆ ಹಳ್ಳಿಗಳಲ್ಲಿನ ಬಡತನ, ಆರೋಗ್ಯ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದೊಂದಿಗೆ ಸ್ವಾವಲಂಬನೆ ನೀಡುವ ಕೆಲಸ ಮಾಡುತ್ತಿದ್ದೇವೆ.
ಸ್ವಾವಲಂಬಿ ಸಮುದಾಯವನ್ನು ನಿರ್ಮಿಸುವಲ್ಲಿ ಮಾರ್ಗದರ್ಶನ ನೀಡುವುದು ನಮ್ಮ ಮುಖ್ಯ ಉದ್ದೇಶ ನಾವು ನಿರ್ದಿಷ್ಟವಾಗಿ ಮಹಿಳೆಯರ ಸಾಮಾಜಿಕ ಕ್ರಿಯಾಶೀಲತೆ ಬಗ್ಗೆ ಗಮನಹರಿಸಲಿದ್ದೇವೆ . ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ಮಹಿಳೆಯನ್ನು ಗುರುತಿಸಿ ಸಬಲೀಕರಣ ಗೊಳಿಸುವರೆ ಪ್ರಯತ್ನಿಸುತ್ತೇವೆ.
ಗಿಡಮೂಲಿಕೆ ಮತ್ತು ಆಯುರ್ವೇದ ಸಸ್ಯಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಮತ್ತು ದೇಶೀಯ ಉತ್ಪನ್ನಗಳ ತಯಾರಿಕೆಯಲ್ಲಿ ಮಾಹಿತಿ ಮತ್ತು ತರಬೇತಿಯನ್ನು ನೀಡುತ್ತೇವೆ.
ಮಣ್ಣಿನ ಮನೆಗಳು ಮತ್ತು ಗೋ- ಉತ್ಪನ್ನಗಳಿಂದ ಬಣ್ಣಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆಯೂ ನಾವು ತರಬೇತಿ ನೀಡುತ್ತೇವೆ ಸಾವಯವ ತರಕಾರಿಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ನಾವು ಜನರಿಗೆ ತರಬೇತಿ ನೀಡುತ್ತೇವೆ ನಮ್ಮೊಂದಿಗೆ ಕೈಜೋಡಿಸಲು ಮತ್ತು ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಬಲವಾದ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸಲು ಸಹಾಯ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ನಮ್ಮ ಎಲ್ಲಾ ಕಾರ್ಯಕ್ರಮಗಳ ಮೂಲಕ ಮತ್ತು ವಿವಿಧ ಸ್ಥಳಗಳಲ್ಲಿ ನಡೆಸಿದ ಶೈಕ್ಷಣಿಕ ಪ್ರಸ್ತುತಿಗಳ ಮೂಲಕ ಪಡೆಯುತ್ತಿರುವ ಅಸಾಧಾರಣ ಪ್ರತಿಕ್ರಿಯೆಯ ಆಧಾರದ ಮೇಲೆ ಒಂದು ತಂಡವಾಗಿ ನಾವು ನಮ್ಮದೇ ಆದ ಸಹಕಾರ ಸೊಸೈಟಿಯನ್ನು ಆರಂಭಿಸಲು ಮುಂದಾಗಿದ್ದೇವೆ
ಅದರಂತೆ ನಾವು ನಮ್ಮ ಅಕ್ಷಯಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಲು ನಿರ್ಧರಿಸಿದ್ದೇವೆ. ಹೊಸ ಸೊಸೈಟಿಯನ್ನು ನೋಂದಾಯಿಸಿದರೊಂದಿಗೆ ಸದಸ್ಯರ ಕುಟುಂಬದಲ್ಲಿ ಸಹಕಾರ ಮನೋಭಾವ ಮಿತವ್ಯಯ ಮತ್ತು ಉಳಿತಾಯವನ್ನು ಪ್ರೋತ್ಸಾಹಿಸುವಾಗ ಅಗತ್ಯವಾದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮತ್ತು ನೈತಿಕ ಸ್ವಾವಲಂಬನೆ ಪಡೆಯಲು ಸಾಧ್ಯವಾಗುತ್ತದೆ.
ನಮ್ಮ ಅಕ್ಷಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ವ್ಯಾಪ್ತಿಯು ಉಡುಪಿ ಜಿಲ್ಲೆಗೆ ಸೀಮಿತವಾಗಿರುತ್ತದೆ
ಮೇಲೆ ತಿಳಿಸಲಾದ ಈ ವ್ಯಾಪ್ತಿಯಲ್ಲಿ ನಮ್ಮ ಧ್ಯೇಯ ಉದ್ದೇಶಗಳನ್ನು ಹೊಂದಿರುವ ನೊಂದಾಯಿತ ಸಹಕಾರಿಗಳ ಸಂಖ್ಯೆಯು ತೀರಾ ಕಡಿಮೆ ಇರುವುದರಿಂದನಮ್ಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಉತ್ತಮ ವ್ಯವಹಾರವನ್ನು ಮಾಡುತ್ತದೆ ಮತ್ತು ಆರ್ಥಿಕ ಯಶಸ್ಸನ್ನು ಸಾಧಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ನಮ್ಮ ಮೂಲ ಉದ್ದೇಶಗಳು ಹೀಗಿವೆ
1 ದೇಶಿ ದನ ಖರೀದಿ ದೇಸಿ ಗೋವಿನ ಗೋಮೂತ್ರ ಹಾಗೂ ಗೋಮಯಗಳಮೌಲ್ಯವರ್ಧನೆಗೆ ಮೌಲ್ಯವರ್ಧನೆಗೆ ಪೂರಕವಾಗಿ ಸಾಲ ಸೌಲಭ್ಯ ದೇಶಿಗು ಉತ್ಪನ್ನಗಳ ಮಾರಾಟ ಮಾಡುವರೇ ಸಾಲ ಸೌಲಭ್ಯ ಸಾವಯುವ ಕೃಷಿ ಗಿಡಮೂಲಿಕೆ ಕೃಷಿ ಹಾಗೂ ಕರಕುಶಲ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ ಸಾವಯ ಉತ್ಪನ್ನಗಳ ಸಂಗ್ರಹಕಾರರಿಗೆ ಉದ್ದೇಶ
2. ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮತ್ತು ಸ್ಥೈರ್ಯದೊಂದಿಗೆ ಸಮಾಜದ ಸದಸ್ಯರ ಚಟುವಟಿಕೆಗಳನ್ನು ಉತ್ತೇಜಿಸುವುದು ಮತ್ತು ಜನಪ್ರಿಯಗೊಳಿಸುವುದು
3. ಸದಸ್ಯರಲ್ಲಿ ಉಳಿತಾಯ ಮನೋಭಾವನೆಯನ್ನು ಸ್ಥಾಪಿಸಿ ಮತ್ತು ಠೇವಣಿಗಳನ್ನು ಸಂಗ್ರಹಿಸಿ ಸೊಸೈಟಿಯ ಬಂಡವಾಳವನ್ನು ಹೆಚ್ಚಿಸಿ ಮತ್ತು ಈ ನಿಧಿಯ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸುವುದು
4. ಸೊಸೈಟಿಯ ಯಾವುದೇ ಸ್ಥಿರ ಸುತ್ತುಗಳನ್ನು ಅದರ ಉದ್ದೇಶಗಳನ್ನು ಸಾಧಿಸುವ ಉದ್ದೇಶದಿಂದ ಸ್ವಾಧೀನ ಪಡಿಸಿಕೊಳ್ಳುವುದು ಖರೀದಿಸುವುದು ಮಾರಾಟ ಮಾಡುವುದು ಗುತ್ತಿಗೆ ಅಥವಾ ವಿಲೇವಾರಿ ಮಾಡುವುದು
5, ಈ ಉದ್ದೇಶಗಳಿಗೆ ಪೂರಕವಾಗುವ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಮತ್ತು ಪ್ರೋತ್ಸಾಹಿಸುವುದು
ನಮ್ಮ ಸಾಮಾಜಿಕ ಸೇವಾ ಚಟುವಟಿಕೆಗಳು
6. ದೇಶಿ ತಳಿಯ ಗೋಶಾಲೆಯನ್ನು ಪ್ರೋತ್ಸಾಹಿಸುವುದು
7 ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವುದು
8. ಆಯುರ್ವೇದ ಮತ್ತು ಗಿಡಮೂಲಿಕೆ ತೋಟಗಳನ್ನು ಉತ್ತೇಜಿಸುವುದು
KARNATAKA PUBLIC SCHOOL HIRIADKA 🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...