Friday, September 6, 2024

Ganesh chaturthi

 ಗೌರಿ ಗಣೇಶ ಹಬ್ಬದ ಶುಭಾಶಯಗಳು





      ಗಣೇಶ ಚತುರ್ಥಿ ಭಾರತ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು ಹಬ್ಬ. ಭಾರತೀಯ ವಾಸಿಗರು ವರ್ಷ ಪೂರ್ತಿ ಈ ಹಬ್ಬದ ಸಂಭ್ರಮ ಸಡಗರಕ್ಕಾಗಿ 

ಕಾತುರದಿಂದ ಕಾಯುವುದೇ ಒಂದು ಸಂತೋಷ. ಈ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ವಿಜೃಭಣೆಯಿಂದ ನಡೆಸುತ್ತಾರೆ. ಈ ಹಬ್ಬವು ಹಿಂದೂ ಧರ್ಮದವರ ದೊಡ್ಡ ಹಬ್ಬವಾಗಿದೆ. ಗಣೇಶ ಚತುರ್ಥಿಯು ಗಣೇಶನ ಜನ್ಮ ದಿನವೆಂದು ಆಚರಿಸುವ ಹಬ್ಬವಾಗಿದೆ. ಪ್ರಥಮ ಪೂಜಿತ ಗಣೇಶನು ಎಲ್ಲ ನೋವು ಕಷ್ಟಗಳ ನಿವಾರಕನಾಗಿ ಸಮೃದ್ದಿಯನ್ನು ವೃದ್ದಿಸುವ ಸದಾ ಕಾಲ ಯಶಸ್ಸನ್ನು ನೀಡುವ ಕಾಮಧೇನು. ಅಲ್ಲದೇ ದುಃಖ, ವಿಘ್ನಗಳ ವಿನಾಶಕನು ಎಂಬ ನಂಬಿಕೆ ಅಗಾಧವಾಗಿ ಹಿಂದೂಗಳಲ್ಲಿ ಜನಿತವಾಗಿ ತುಂಬಿದೆ.


   ಈ ಹಬ್ಬವನ್ನು ಹನ್ನೊಂದು ದಿವಸಗಳ ಕಾಲ ಆಚರಿಸಲಾಗುತ್ತದೆ. ಮನೆಗಳಲ್ಲಿ ದೇವಾಲಯಗಳಲ್ಲಿ ಮಹಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಹಬ್ಬದ ಹೊನಲನ್ನು ಸಂತೋಷದಿಂದ ಸಂಭ್ರಮಿಸುತ್ತಾರೆ. ಶೃಂಗಾರ, ಮಂತ್ರ ಪಠಣ ,ಭಕ್ತಿಗೀತೆ ಇವುಗಳೊಂದಿಗೆ ವಿವಿಧ ಭಕ್ಷಗಳ ನೈವೇದ್ಯ,ಮೋದಕ ಪಂಚಕಜ್ಜಾಯ ಸಿಹಿ ಉಂಡೆಗಳು ಎಲ್ಲವನ್ನು ಹನ್ನೊಂದು ದಿವಸವೂ ಮಾಡುವುದು ತಿನ್ನುವುದು ವಿಶೇಷ ಅತಿಥಿಗೆ ವಿಶೇಷ ಆತಿಥ್ಯವನ್ನು ಮಾಡುತ್ತಾರೆ. ಈ ಹಬ್ಬಕ್ಕೆ ಹೊಸ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಹನ್ನೊಂದು ದಿವಸಗಳ ನಂತರ ಗಣಪನನ್ನು ನೀರಿನಲ್ಲಿ ಮುಳುಗಿಸುತ್ತಾರೆ. ವಿಶೇಷವಾಗಿ ಈ ಹಬ್ಬ ಗಣೇಶನ ಗೌರವಾರ್ಥದ ವಿನೋದದಿಂದ ತುಂಬಿದ ಹಬ್ಬವಾಗಿದೆ.ಜಾತಿ ವರ್ಣ ಬೇಧವಿಲ್ಲದೆ ಆನಂದಿಸುವ ಹಬ್ಬವಾಗಿದೆ.


     


No comments:

Post a Comment

SSLC TIME TABLE _ 2023

TOPPER IN PUC EXAM RESULT

           KARNATAKA PUBLIC SCHOOL HIRIADKA                      🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...